Friday, November 20, 2015

ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸುವಂತೆ ಕೃಷಿ ಸಚಿವ ಕೃಷ್ಣಭೈರೇಗೌಡ ಕರೆ

ಬೆಂಗಳೂರು, ನವೆಂಬರ್ 19: ರೈತರು ಹೊಸ ವೈಜ್ಞಾನಿಕ ವಿಧಿ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿ ಹೆಚ್ಚು ಉತ್ಪಾದನೆಗೆ ಒತ್ತು ನೀಡಬೇಕೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.)ಯಲ್ಲಿ ಕೃಷಿ, ಜಲಾನಯನ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ನವೆಂಬರ್ 19 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿರುವ ಕೃಷಿ ಮೇಳ -2015 ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
        ಈ ವರ್ಷ ದಕ್ಷಿಣ ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಚಿತ್ರದುರ್ಗ ಮಂಡ್ಯ ಜಿಲ್ಲೆಗಳು ಬರದಿಂದ ತತ್ತರಿಸಿವೆ. ಉತ್ತರ ಭಾಗದ ಜಿಲ್ಲೆಗಳಲ್ಲೂ ಬರ ತಲೆದೋರಿದೆ. ಈ ಹತ್ತು ದಿನಗಳಲ್ಲಿ ಸುರಿದ ಹಿಂಗಾರು ಮಳೆಯಿಂದ ನೀರಿನ ಕೊರತೆ ಸ್ವಲ್ಪ ಮಟ್ಟಿಗೆ ನೀಗಿದರೂ ಮಳೆಯಿಂದ ಬೆಳೆ ನಾಶ ಕೂಡ ಸಂಭವಿಸಿದೆ ಎಂದರು.
ಮುಂದುವರೆದ ದೇಶಗಳು ಉತ್ಪಾದನೆ, ಉತ್ಪಾದಕತೆ ಎರಡಕ್ಕೂ ಒತ್ತು ನೀಡುತ್ತಿವೆ. ಈಗ ಸ್ವಯಂ ಚಾಲಿತ ಕಾರುಗಳು ಮಾರುಕಟ್ಟೆಗೆ ಬಂದಿದೆ. ಹಸಿರು ಮನೆಯಲ್ಲಿ ವಿದ್ಯುತ್ ದೀಪದ ಬಳಕೆಯನ್ನು ಕಂಡುಕೊಂಡಿದ್ದೇವೆ. ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಂದ ನಾವು ಸಮಸ್ಯೆಗಳನ್ನು ಬಗೆಹರಿಸಬೇಕು. ಹೊಸ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಿ ಅವರು ಬಳಸುವಂತೆ ಮಾಡಬೇಕೆಂದರು.
        ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರಾದ ವಾಜುಭಾಯಿ ರೂಢಾಬಾಯಿ ವಾಲಾ, ಜ್ಞಾನ ಮತ್ತು
ಈ ಸಂದರ್ಭದಲ್ಲಿ ದಿವಂಗತ ಸಿ. ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿಯನ್ನು ಹಾವೇರಿಯ ಹಾನಗಲ್ ತಾಲ್ಲೂಕಿನ ಕಾಮನಹಳ್ಳಿಯ ಪ್ರಗತಿ ರೈತ ಮುತ್ತಣ್ಣ ಬೀರಪ್ಪ ಪೂಜಾರ ಅವರಿಗೆ ಪ್ರದಾನ ಮಾಡಲಾಯಿತು. ಇವರು ಕುರಿ, ಮೇಕೆ ಸಾಕಾಣಿಕೆ, ಇತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಡಾ: ಎಂ.ಎಚ್. ಮರೀಗೌಡ ರಾಜ್ಯಮಟ್ಟದ ತೋಟಗಾರಿಕಾ ರೈತ ಪ್ರಶಸ್ತಿಯನ್ನು ಹಾಸನ ಜಿಲ್ಲೆ ಸಕಲೇಶಪುರದ ಹಂಜುಗೋಡನಹಳ್ಳಿಯ ಕಾಫಿ ಬೆಳೆಗಾರರಾದ ಪ್ರಗತಿಪರ ರೈತ ಎಚ್.ಎಲ್. ನರೇಶ್ ಅವರಿಗೆ ಹಾಗೂ ಹಾವೇರಿಯ ಶಿಗ್ಗಾಂನ ಇಬ್ರಾಹಿಂಪುರದ ಪ್ರಗತಿಪರ ರೈತ ಸಿದ್ಧಲಿಂಗೇಶ್ವರ ವೀರಪ್ಪ ಕಲಿವಾಳ (ಅಡಿಕೆ, ತೆಂಗು ಬೆಳೆಗಾರರು) ಅವರಿಗೆ ಪ್ರದಾನ ಮಾಡಲಾಯಿತು.
       ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಹೆಚ್. ಶಿವಣ್ಣ ಗಣ್ಯರನ್ನು ಸ್ವಾಗತಿಸಿದರು. ಶಾಸಕರು ಜಗಳೂರು ಹಾಗೂ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಕೃಷಿ ವಿಶ್ವವಿದ್ಯಾಲಯ ಎಚ್.ಪಿ. ರಾಜೇಶ್, ಕೃಷಿ ಇಲಾಖೆಯ ನಿರ್ದೇಶಕರಾದ ಡಾ: ಸಿ ಎನ್.ಸ್ವಾಮಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ: ಕೆ. ಜಗದೀಶ್ವರ ಉಪಸ್ಥಿತರಿದ್ದರು. ರಾಜ್ಯದ ವಿವಿದೆಡೆಯಿಂದ ಜನರು, ಕೃಷಿಕರು ಕೃಷಿಮೇಳಕ್ಕೆ ಬಂದು ಇಲ್ಲಿನ ವಿವಿಧ ಸ್ಟಾಲ್‍ಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
       ತಂತ್ರಜ್ಞಾನ, ಇವರೆಡೂ ಕೃಷಿಕರನ್ನು ತಲುಪಬೇಕು. ದೇಶದಲ್ಲಿ ಶೇ. 65 ರಷ್ಟು ಜನ ಜೀವನೋಪಾಯಕ್ಕೆ ಕೃಷಿಯನ್ನು ಅವಲಂಭಿಸಿದ್ದಾರೆ. ಈಗ ಕೃಷಿಯನ್ನು ವಿವಿಧ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ನಡೆಸುತ್ತಿದೆ. ಕರ್ನಾಟಕದಲ್ಲಿ ಕಾವೇರಿ, ತುಂಗಭದ್ರದಂತಹ ನದಿಗಳು ಹರಿದು ನೆಲದ ಸಿರಿಯನ್ನು ಹೆಚ್ಚಿಸಿದೆ. ಆದರೂ ರಾಜ್ಯಗಳ ನಡುವೆ ನೀರಿನ ಹಂಚಿಕೆ ವಿವಾದ ಬಗೆಹರಿದಿಲ್ಲ. ರೈತರು ಬೆಳೆ ನಷ್ಟದ ಬಗ್ಗೆ ಧೃತಿಗೆಡದೆ, ಯಾವ ಬೆಳೆಗೆ ಹೆಚ್ಚು ಬೇಡಿಕೆ, ಲಾಭ ದೊರೆಯುತ್ತದೆ, ಅಂತಹ ಬೆಳೆಯನ್ನು ಬೆಳೆಯುವುದು ಒಳಿತು. ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ನಾಲ್ಕು ದಿವಸಗಳ ಕೃಷಿ ಮೇಳದಲ್ಲಿ ಹೆಚ್ಚು ಜನರು ಭಾಗವಹಿಸಬೇಕೆಂದರು.

No comments:

Post a Comment