Sunday, November 15, 2015

ಟಿಪ್ಪು ಸುಲ್ತಾನ ಮಾಡಿದ್ದೆಲ್ಲವು ಸರಿ...ತಪ್ಪೆಲ್ಲವು ಹಿಂದುಗಳದ್ದೇ!!





(ಆಂಧ್ರಭೂಮಿ ತೆಲುಗು ದಿನಪತ್ರಿಕೆಯಲ್ಲಿ ದಿನಾಂಕ 14-11-2015 ರಂದು ಮುಖಪುಟದಲ್ಲಿ ಪ್ರಕಟವಾದ ಸಂಪಾದಕ ಎಂ.ವಿ.ಆರ್.ಶಾಸ್ತ್ರಿ ಯವರ ಲೇಖನದ ಅನುವಾದ)


      ಟಿಪ್ಪು ಸುಲ್ತಾನ ಜಾತ್ಯಾತೀತ ಹೌದಾ, ಅಲ್ಲವೇ ಎಂದು ಬೇರಾರನ್ನೋ ಕೇಳಬೇಕಾದ ಕೆಲಸವಿಲ್ಲ.
ಆ ವಿಷಯವನ್ನು ಟಿಪ್ಪು ಸುಲ್ತಾನನೇ ಬಿಡಿಸಿ ಹೇಳುತ್ತಾನೆ.

    “ಮೀರ್ ಹುಸ್ಸೇನ್ ಅಲಿಯೊಂದಿಗೆ ನಮ್ಮವರು ಇಬ್ಬರನ್ನು ಕಳಿಸುತ್ತಿದ್ದೇನೆ. ಅವರ ಸಹಾಯದಿಂದ ನೀನು ಹಿಂದುಗಳೆಲ್ಲರನ್ನು ಹಿಡಿದು ಸಾಯಿಸಬೇಕು. 20ವರ್ಷ ಒಳಗಿರುವವರನ್ನು ಸೆರೆಮನೆಗೆ ತಳ್ಳಬೇಕು. ಉಳಿದವರಲ್ಲಿ 5000 ಮಂದಿಯನ್ನು ಮರಗಳಿಗೆ ನೇಣು ಬಿಗಿದು ಸಾಯಿಸಬೇಕು. ಇದು ನನ್ನ ಆದೇಶ”
‘ಆದರ್ಶ ರಾಜ’ ಟಿಪ್ಪು ಸುಲ್ತಾನ 1788 ಡಿಸೆಂಬರ್ 14ರಂದು ಕಲ್ಲಿಕೋಟೆಯಲ್ಲಿದ್ದ ತನ್ನ ಸೈನ್ಯಾಧಿಪತಿಗೆ ಬರೆದ ಪತ್ರದ ಸಾರಾಂಶ ಇದು.
      “ಹನ್ನೆರಡು ಸಾವಿರಮಂದಿ ಹಿಂದುಗಳು ಇಸ್ಲಾಂ ಮತವನ್ನು ಸ್ವೀಕಾರ ಮಾಡಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ನಂಬೂದ್ರಿ ಬ್ರಾಹ್ಮಣರು ಇದ್ದಾರೆ. ಈ ವಿಷಯವನ್ನು ಹಿಂದುಗಳಲ್ಲಿ ಚೆನ್ನಾಗಿ ಪ್ರಚಾರ ಮಾಡಿಸು. ಆಗ ಹಿಂದುಗಳನ್ನು ನಿನ್ನ ಬಳಿಗೆ ಕರೆಸಿಕೊಂಡು ಇಸ್ಲಾಂಗೆ ಮತಾಂತರ ಮಾಡು. ನಂಬೂದ್ರಿ ಬ್ರಾಹ್ಮಣ ಒಬ್ಬನನ್ನೂ ಬಿಡಬೇಡ.”
1788 ಮಾರ್ಚಿ 22ರಂದು ‘ಮಾಡಲ್ ಕಿಂಗ್’ ಟಿಪ್ಪು ಸುಲ್ತಾನ ಅವರು ಅಬ್ದುಲ್ ಕದೀರ್‍ಗೆ ಬರೆದು ಕಳುಹಿಸಿದ ಸೂಚನೆ ಇದು.

     “ಇತ್ತೀಚೆಗೆ ಕರಾವಳಿಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚುಮಂದಿ ಹಿಂದುಗಳನ್ನು ಇಸ್ಲಾಂಗೆ ಬದಲಾಯಿಸಿ ಘನ ವಿಜಯವನ್ನು ಸಾಧಿಸಿರುತ್ತೇನೆ. ಈ ವಿಷಯ ನಿನಗೆ ಗೊತ್ತಿಲ್ಲವೇ?”
1790 ಜನವರಿ 19ರಂದು ಬುದ್ರುಜ್ ಜುಮಾನ್ ಖಾನ್‍ಗೆ ‘ರಾಷ್ಟ್ರೀಯ ವೀರ’ ಟಿಪ್ಪು ಸುಲ್ತಾನ ಬರೆದ ಪತ್ರ ಇದು.

   “ಪ್ರವಾದಿ ಮಹಮ್ಮದ್, ಅಲ್ಲಾಹು ದಯೆಯಿಂದ ಕಲ್ಲಿಕೋಟೆಯಲ್ಲಿನ ಹಿಂದುಗಳೆಲ್ಲರೂ ಇಸ್ಲಾಂಗೆ ಮತಾಂತರ ಮಾಡಲ್ಪಟ್ಟಿದ್ದಾರೆ. ಕೊಚ್ಚಿನ್ ರಾಜ್ಯದ ಗಡಿಯಲ್ಲಿನ ಕೆಲವರು ಮಾತ್ರವೇ ಇನ್ನೂ ಬದಲಾಗದೇ ಉಳಿದುಕೊಂಡಿರುತ್ತಾರೆ. ಅವರನ್ನೂ ಅತಿ ಶೀಘ್ರದಲ್ಲಿಯೇ ಬದಲಾಯಿಸಿ ಬಿಡಬೇಕೆಂದು ನಿರ್ಣಯಿಸಿದ್ದೇನೆ. ಇದನ್ನೇ ‘ಜೀಹಾದ್’ಎಂದು ನಾನು ಅಂದುಕೊಳ್ಳುತ್ತಿದ್ದೇನೆ.”
1790 ಜನವರಿ 18 ರಂದು ಸಯ್ಯದ್ ಅಬ್ದುಲ್ ದುಲಾಯ್‍ಕಿಗೆ ‘ಜಾತ್ಯಾತೀತ ಆಡಳಿತಗಾರ’ ಟಿಪ್ಪು ಸುಲ್ತಾನ ಬರೆದಂತಹ ಪತ್ರ ಇದು.

      ಈ ಪತ್ರಗಳೆಲ್ಲವೂ ನಿನ್ನೆಯೋ ಮೊನ್ನೆಯೋ ನರೇಂದ್ರ ಮೋದಿಯವರ ಬಂಬಲಿಗರು ಬಹಿರಂಗ ಪಡಿಸಿದವು ಅಲ್ಲವೇ ಅಲ್ಲ. ಸುಪ್ರಸಿದ್ದ ಇತಿಹಾಸಕಾರ ಕೆ. ಎಂ. ಪಣಿಕ್ಕರ್ ಕಷ್ಟಪಟ್ಟು ಸಂಗ್ರಹಿಸಿ ಇಂದಿಗೆ ತೊಂಬತ್ತು ವರ್ಷಗಳ ಹಿಂದೆ ‘ಭಾಷಾ ಪೋಷಿಣಿ’ ಪತ್ರಿಕೆ (1923 ಆಗಸ್ಟ್ ಸಂಚಿಕೆ)ಯಲ್ಲಿ ಬಹಿರಂಗಗೊಳಿಸಿದ ಪತ್ರಗಳಿವು. ಅದಕ್ಕೆ ನೂರು ವರ್ಷಗಳ ಹಿಂದೆ William Kirkpatrick 1811ರಲ್ಲಿ ಪ್ರಕಾಶಪಡಿಸಿದ  Selected Letters of Tipoo Sultan ಗ್ರಂಥದಲ್ಲಿಯೂ ಇಂತಹ ಪತ್ರರತ್ನಗಳು ಬಹಳಷ್ಟು ದೊರೆಯುತ್ತವೆ.
    ಪತ್ರಗಳಲ್ಲಿ ಬರೆದುಕೊಂಡಿದ್ದು ಬೊಗಳೆ ಆಗಿರ ಬಹುದಲ್ಲವೇ?. ಆದೇಶಗಳನ್ನು ಕಳುಹಿಸಿದ ಮಾತ್ರಕ್ಕೆ ಅವೆಲ್ಲವೂ ಹಾಗೆಯೇ ಜಾರಿ ಆಗಿರುತ್ತವೆ ಎಂದು ಹೇಗೆ ನಂಬುತ್ತೇವೆ?.

     ನಂಬಬೇಡಿ. 19ನೇ ಶತಮಾನದ ‘ಮೈಸೂರು ಗೆಜೆಟಿಯರ್’ಅನ್ನು ನೋಡಿರಿ. ದಕ್ಷಿಣ ಭಾರತದಲ್ಲಿ ಟಿಪ್ಪುವಿನ ಸೇನೆಗಳು 8000 ದೇವಾಲಯಗಳನ್ನು ಸರ್ವನಾಶ ಮಾಡಿರುವುದು ಕಂಡುಬರುತ್ತದೆ. ಅದರಲ್ಲೂ ಪ್ರಮುಖವಾಗಿ ಕರಾವಳಿ, ಕೊಚ್ಚಿನ್‍ಗಳಲ್ಲಿ ನಡೆದ ದರೋಡೆಗಳಿಗೆ, ದೇವಾಲಯಗಳ ವಿಧ್ವಂಸಗಳಿಗೆ ಎಣೆಯೇ ಇಲ್ಲವೆಂದು ಅರ್ಥವಾಗುತ್ತದೆ.
   ಅದಿರಲಿ, ನಮ್ಮವನಲ್ಲದ Lewis B.Boury ನನ್ನು ಕೆದಕಿನೋಡಿ. ಕರಾವಳಿಯಲ್ಲಿ ಹಿಂದುಗಳ ಮೇಲೆ, ಹಿಂದೂ ದೇವಾಲಯಗಳ ಮೇಲೆ ಟಿಪ್ಪು ಸುಲ್ತಾನ ಮಾಡಿಸಿದ ಭೀಕರ ದುರಾಚಾರಗಳು ಗಜನಿ ಮಹಮ್ಮದ್, ಅಲ್ಲಾಉದ್ದೀನ್ ಖಿಲ್ಜಿ, ನಾದಿರ್‍ಷಾ, ಔರಂಗಜೇಬ್ ಅಂತಹವರ ಪ್ರತಾಪಗಳಿಗೆ ಯಾವುದರಲ್ಲಿಯೂ ತೆಗೆದು ಹಾಕುವಂತಿಲ್ಲ ಎಂದು ಹೇಳುತ್ತಾ ಆತನು ದೊಡ್ಡ ಪುಸ್ತಕವನ್ನೇ ಬರೆದಿದ್ದಾನೆ.
   ‘ಕೇರಳದಲ್ಲಿ ಟಿಪ್ಪು ಸುಲ್ತಾನನ ದಂಡಯಾತ್ರೆಗಳ ದಾರುಣಗಳನ್ನು ನೋಡಿದರೆ ಚೆಂಘೀಜ್‍ಖಾನ್, ತೈಮೂರ್ ಅವರನ್ನು ನೆನಪಿಗೆ ತರುತ್ತವೆ ಎಂದು ಪ್ರಸಿದ್ಧ ಮಹಮ್ಮದೀಯ ಇತಿಹಾಸಕಾರ ಪಿ. ಎಸ್. ಸಯ್ಯದ್ ಮಹಮ್ಮದ್ ‘ಕೇರಳ ಮುಸ್ಲಿಮ್ ಚರಿತ್ರಮ್’ ಗ್ರಂಥದಲ್ಲಿ ವರ್ಣಿಸಿದ್ದಾನೆ.
  ಪುಸ್ತಕಗಳಿಗೇನು? ತಿಳಿದೋ ತಿಳಿಯದೆಯೋ ಯಾರಾದರೂ ಏನಾದರೂ ಬರೆದು ಬಿಸಾಡಬಹುದು...ಎಂದು ಹೊಡೆದುಹಾಕೋಣವೇ?. 

    1783 ರಿಂದ 1791ರ ವರೆಗೆ ಕರಾವಳಿ ಭಾಗದಲ್ಲಿ ಟಿಪ್ಪು ಸುಲ್ತಾನನ ಪೈಶಾಚಿಕ ಕೃತ್ಯಗಳಿಂದಾಗಿ 30,000 ಮಂದಿ ಬ್ರಾಹ್ಮಣರು, ಇನ್ನೂ ಎಷ್ಟೋ ಸಾವಿರಮಂದಿ ನಾಯರ್‍ಗಳು ಮನೆ, ಆಸ್ತಿಪಾಸ್ತಿಗಳನ್ನು ಬಿಟ್ಟು ಪ್ರಾಣಭಯದಿಂದ ತಿರುವಾನ್ಕೂರು ರಾಜ್ಯಕ್ಕೆ ಓಡಿಹೋಗಿದ್ದಾಗಿ ಟಿಪ್ಪು ಮರಣಾನಂತರ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯವರು ನೇಮಕಮಾಡಿದ ವಿಚಾರಣಾ ಸಮಿತಿ ತನಿಖೆಯಲ್ಲಿ ಬಯಲಾಗಿದೆ. ಆ ವರದಿ ಬ್ರಿಟೀಷ್ ದೊರೆಗಳಿಗೆ ತಿಳಿಯುವುದಕ್ಕೆ ಮಾತ್ರ ತಿಳಿಸಲು ಸಿದ್ಧಪಡಿಸಿದ್ದೇ ಹೊರತು ಪುಸ್ತಕ ಬರೆಯಬೇಕೆಂಬ ಉದ್ದೇಶದಿಂದ ಒಟ್ಟು ಮಾಡಿದ್ದಲ್ಲ. 1866-86 ನಡುವಿನ ಅವಧಿಯಲ್ಲಿ ಆ ಪ್ರದೇಶದಲ್ಲಿ ಕಲೆಕ್ಟರ್ ಆಗಿ ಕೆಲಸ ಮಾಡಿದ William Logan ದಾಖಲೆಗಳನ್ನು ಪರಿಶೀಲನೆ ಮಾಡಿ, ಸಮಗ್ರವಾಗಿ ಸಮಾಚಾರವನ್ನು ಸಂಗ್ರಹಿಸಿ ಹೊರಗೆಡಹಿದ ಮಲಬಾರ್ ಮ್ಯಾನ್ಯುವಲ್‍ನಲ್ಲಿಯೂ ಟಿಪ್ಪು ಮಾಡಿಸಿದ ಅತ್ಯಾಚಾರಗಳು, ಸಾಮೂಹಿಕ ಸುನ್ತಿಗಳು, ‘ಕತ್ತಿ ಇಲ್ಲವೆ ಟೋಪಿ’ ಘೋಷಣೆಯೊಂದಿಗೆ ತಲೆಯ ಮೇಲೆ ಟೋಪಿ ಧರಿಸಲು ಒಪ್ಪದವರನ್ನು ಸಾವಿರಾರು ಸಂಖ್ಯೆಯಲ್ಲಿ ಹತ್ಯೆಗೈದ ಘಟನೆಗಳು, ದೇವಾಲಯಗಳನ್ನು ಮಲಿನಗೊಳಿಸಿ, ಬಲಾತ್ಕಾರವಾಗಿ ದನದ ಮಾಂಸವನ್ನು ಬಾಯಿಗೆ ತುರುಕಿ, ಮಹಿಳೆಯರನ್ನು ಕೆಡಿಸಿ, ಚಿಕ್ಕ ಮಕ್ಕಳನ್ನೂ ಸಾಯಿಸಿದ ಪೈಶಾಚಿಕ ಕೃತ್ಯಗಳನ್ನು ಬಿಡಿಸಿಟ್ಟಿದ್ದಾರೆ. ಅದರ ಇತ್ತೀಚಿನ ಮರು ಮುದ್ರಣನ್ನು ಕೊಚ್ಚಿನ್, ಕೇರಳ ವಿಶ್ವವಿದ್ಯಾಲಯಗಳ ಸಹಕಾರದಿಂದ ಪ್ರಖ್ಯಾತ ಮುಸ್ಲಿಂ ಇತಿಹಾಸಕಾರ ಡಾಕ್ಟರ್ ಸಿ. ಕೆ. ಕರೀಮ್ ಮರು ಪರಿಶೀಲಿಸಿ ಮುದ್ರಿಸಿದ್ದಾನೆ.
    ಅದೂ ಹೋಗಲಿ......ಬ್ರಿಟೀಷರಿಗೆ ಟಿಪ್ಪು ಸುಲ್ತಾನ ಪರಮ ವೈರಿ ಆದ್ದರಿಂದ ಇಂಗ್ಲೀಷರ ಕಣ್ಣಿಗೆ ಆತನಲ್ಲಿ ಎಲ್ಲವೂ ತಪ್ಪುಗಳಾಗಿಯೇ ಕಾಣೀಸಿರ ಬಹುದು. ಆ ‘ಸ್ವಾತಂತ್ರ್ಯ ಸಮರ ಯೋಧ’ನ ಹೆಸರು ಕೆಡಿಸಲಿಕ್ಕೆಂದೇ ಅವರು ಇಲ್ಲಸಲ್ಲದ್ದನ್ನು ಸೃಷ್ಟಿಸಿರಬಹುದು ಎಂದು ಅಂದುಕೊಳ್ಳೋಣವೇ?
     ಇಂಗ್ಲೀಷ್ ನವನಲ್ಲದ ವಿದೇಶಿಯ, 1790ರಲ್ಲಿ ಟಿಪ್ಪು ಸುಲ್ತಾನನ ಯುದ್ಧದ ಭೀಕರತೆಯನ್ನು ಅಲ್ಲಿಯೇ ಇದ್ದು ಕಣ್ಣಾರೆ ಕಂಡಿದ್ದ ಪೋರ್ಚುಗಲ್‍ನ ಯಾತ್ರಿಕ Barthoelomeo ತದನಂತರದ ಕಾಲದಲ್ಲಿ ಬರೆದ 'Voyage to East Indies’ನಲ್ಲಿ ಹೇಳಿರುವುದು ಇದು.
    First a cops of 30,000 barbarians butchered everybody on the way…Tipu was riding an elephant behind which another army of 30,000 soldiers followed. Most of the men and women were hanged in Calicut. First mothers were hanged with their children tied to necks of mothers. That barbarian Tipu Sultan tied the necked Christians and Hindus to the legs of elephants and made the elephants to move around till the bodies of the helpless victims were torn to pceces. Temples and Churches were ordered to be burned down, desecrated and destroyed….
(ಮುಂದೆ 30 ಸಾವಿರ ಸೈನಿಕರು ಹೊರಟು ದಾರಿಯಲ್ಲಿ ಕಾಣಿಸಿದ ಎಲ್ಲರನ್ನೂ ಕತ್ತರಿಸಿ ಹಾಕಿತು....ಟಿಪ್ಪು ಆನೆಯ ಮೇಲೆ ಸವಾರಿ ಮಾಡುತ್ತಿದ್ದಾನೆ. ಇನ್ನೂ 30 ಸಾವಿರ ಸೈನಿಕರು ಆತನ ಹಿಂದೆ ನಡೆದಿದ್ದಾರೆ. ಕಲ್ಲಿಕೋಟೆಯಲ್ಲಿದ್ದ ಸ್ತ್ರೀ ಪುರುಷರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನೇಣಿಗೆ ಹಾಕಿದ್ದಾರೆ. ಮೊದಲು ತಾಯಂದಿರನ್ನು ನೇಣಿಗೇರಿಸಿ ಮಕ್ಕಳನ್ನೂ ಅವರ ಕುತ್ತಿಗೆಗಳಿಗೆ ಬಿಗಿದಿದ್ದಾರೆ. ಕಿರಾತಕನಾದ ಟಿಪ್ಪು ಸುಲ್ತಾನ ಕ್ರೈಸ್ತರನ್ನು, ಹಿಂದುಗಳನ್ನು ಬೆತ್ತಲೆಯಾಗಿ ಆನೆಗಳ ಕಾಲುಗಳಿಗೆ ಕಟ್ಟಿಹಾಕಿಸಿ, ಅವರು ತುಂಡು ತುಂಡುಗಳಾಗಿ ಆಗುವವರೆಗೆ ಸುತ್ತಲೂ ನಡೆಸಿದ್ದಾನೆÉ. ದೇವಾಲಯಗಳು, ಚರ್ಚ್‍ಗಳನ್ನು ಸುಟ್ಟುಹಾಕಿ, ಮಲಿನ ಮಾಡಿ, ನಾಶ ಮಾಡಿಸಿದ್ದಾನೆ.)
    ಅದು ವಿಷಯ! ಎಲ್ಲ ಮತಗಳನ್ನು ಸಮಾನವಾಗಿ ಕಾಣಬೇಕು ಎನ್ನುವುದು ಜಾತ್ಯಾತೀತವಾದ....ಅಂತೆ ಅಲ್ಲವೇ?. ಮಾರಣಕಾಂಡ ನಡೆಸುವ ವಿಷಯದಲ್ಲಿಯೂ ಹಿಂದು, ಕ್ರೈಸ್ತ ಮತಗಳಿಗೆ ಸೇರಿದವರನ್ನು ಸಮಾನವಾಗಿ ಕಂಡಿದ್ದಾನೆ. ಆ ಕಾರಣವಾಗಿ ಇರಬಹುದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಾಂಗ್ರೆಸ್ ಕಣ್ಣಿಗೆ ಟಿಪ್ಪು ಸುಲ್ತಾನ ಅಸಲಿಯಾದ ಜಾತ್ಯಾತೀತವಾದಿ ಆಗಿಯೂ, ಮಾದರಿ ರಾಜನಾಗಿಯೂ, ರಾಷ್ಟ್ರೀಯ ಯೋಧನಾಗಿಯೂ ಕಾಣಿಸಿದ್ದು ಇರಬಹುದು.
    ಈ ಹಿಂದೆ ಕಾಂಗ್ರೆಸ್‍ನ ಅಧಿನಾಯಕರು ಆ ಮಹಾ’ಸ್ವಾತಂತ್ರ್ಯ ಸಮರಯೋಧ’ನ, ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು. ಜಾತ್ಯಾತೀತ ರಾಜ್ಯದಲ್ಲಿ ಸರ್ಕಾರದ ಅಧೀನದ ದೂರದರ್ಶನ  The Sword of Tipu Sultan ಎಂಬ ಹೆಸರಲ್ಲಿ ಟಿಪ್ಪು ಅವರನ್ನು ಆಕಾಶದ ಎತ್ತರಕ್ಕೆ ಎತ್ತಿತೋರಿಸಿ ಮಹಾವೀರನಾಗಿ, ಸುಗುಣಗಳ ರಾಶಿಯಾಗಿ ಚಿತ್ರಿಸುತ್ತಾ ಶುದ್ಧ ಸುಳ್ಳುಗಳನ್ನು ಹೆಣೆದು ಮೆಗಾ ಧಾರಾವಾಹಿಯನ್ನು ತೋರಿಸಿ ಸರ್ಕಾರದ ರುಣ ಸಂದಾಯ ಮಾಡಿತ್ತು. ಹಾಗಿದ್ದಾಗ ತಾವು ಮಾತ್ರ ಆ ‘ಮೈಸೂರು ಹುಲಿ’ಗೆ ಮರ್ಯಾದೆ ತೋರದೆ ಹೋದರೆ ತಪ್ಪಾಗುವುದೆಂದು ತಿಳಿದು, ಇಷ್ಟು ವರ್ಷಗಳ ನಂತರ ಆ ‘ರಾಷ್ಟ್ರೀಯ ವೀರ’ನ ಜನ್ಮದಿನವನ್ನು ಕನ್ನಡದ ಸಿದ್ದಣ್ಣ ಸರ್ಕಾರದ ವತಿಯಿಂದ ಅದ್ಧೂರಿಯಾಗಿ ನಡೆಸಿದ್ದಾರೆ.
    ಅದನ್ನು ನೋಡಿ ಗಿರೀಶ್ ಕಾರ್ನಾಡ್ ಅನ್ನುವ ‘ಜ್ಞಾನಪೀಠ’ ಹತ್ತಿದ ಮಹಾಜ್ಞಾನಿ ಆನಂದ ಪರವಶರಾಗಿ, ಇಮ್ಮಡಿಸಿದ ಉತ್ಸಾಹದಿಂದ “ಟಿಪ್ಪು ಸುಲ್ತಾನ ಎಂಬಾತ ಶಿವಾಜಿ, ನೇತಾಜಿಗಳ ಪಕ್ಕಕ್ಕೆ ತುರ್ತಾಗಿ ಸೇರ್ಪಡೆ ಗೊಳಿಸ¨ಹುದಾದ ಮಹಾನುಭವ ಎಂದು, ಅಂತಹ ಪುಣ್ಯಾತ್ಮನನ್ನು ಪ್ರತಿದಿನ ನೆನಪಿಸಿಕೊಳ್ಳುವಂತೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿರುವ ಕೆಂಪೇಗೌಡರ ಹೆಸರನ್ನು ಪಕ್ಕಕ್ಕೆ ತಳ್ಳಿ ಟಿಪ್ಪು ಸುಲ್ತಾನನ ಹೆಸರನ್ನು ತಗುಲಿಸಿದರೆ ಮಾತ್ರ ಜಾತ್ಯಾತೀತ ಭಾರತದ ಕೀರ್ತಿ ಪ್ರತಿಷ್ಟೆಗಳು ಇನ್ನಷ್ಟು ಬೆಳಗಿ ಹೋಗುವುದಿಲ್ಲ'' ಎಂದು ಉದ್ಘಾರ ಮಾಡಿ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶನ ಮಾಡಿಕೊಂಡಿದ್ದಾನೆ.
   ಹಿಂದುಗಳನ್ನು ಹಿಂಸೆಮಾಡಿದ ಯಾರೇ ಆಗಲಿ ಅಂತಹವನು ಜಾತ್ಯಾತೀತ ಆಗಿರುತ್ತಾನೆ. ಆದುದರಿಂದ ನಮ್ಮ ಪುಣ್ಯಭೂಮಿಯಲ್ಲಿನ ಸಮಸ್ತ ವಾಮಪಕ್ಷ, ಪ್ರಗತಿಪರ, ಪ್ರಜಾತಂತ್ರ ಮೇಧಾವಿಗಳೆಲ್ಲರೂ ಸಹ ಆನಂದ ಪರವಶರಾಗಿದ್ದಾರೆ. ಹಾಗಿರುವಾಗ ಮತೋನ್ಮಾದಿಗಳಾಗಿರುವ ಹಿಂದುಗಳೇ ಆ ಮಹಾಪುರುಷನ ಜನ್ಮದಿನದ ಆಚರಣೆ ಅದ್ಧೂರಿಯಾಗಿ ನಡೆಯದಂತೆ ವರಾತ ತೆಗೆದಿದ್ದಾರೆ.
    ಅವರಿಗೆಲ್ಲೋ ಬುದ್ಧಿ ಭ್ರಮಣೆ ಯಾಗಿರಬೇಕು ಅಷ್ಟೇ. ‘ನಮ್ಮ ದೇಶದ ಮೇಲೆ ದಾಳಿಗೆ ಬನ್ನಿ. ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ’ ಎಂದು ಟಿಪ್ಪು ಸುಲ್ತಾನ ಫ್ರೆಂಚರಿಗೆ ಕರೆಹೇಳಿ, ದೇಶದ್ರೋಹ ಎಸಗಿದರೇನಂತೆ? ಇಂಗ್ಟೀಷರನ್ನು ತೀವ್ರವಾಗಿ ವಿರೋಧಿಸಿದ್ದ. ಆದ ಕಾರಣ ಆತನನ್ನು ಸ್ವಾತಂತ್ರ್ಯ ಯೋಧ, ರಾಷ್ಟ್ರೀಯ ವೀರ ಎಂದು ಹೊಗಳಿ ಜಾತ್ಯಾತೀತ ಬುದ್ದಿಜೀವಿಗಳೊಂದಿಗೆ ಹಿಂದುಗಳು ಸಹ ಉಬ್ಬಿ ಹೋಗಿರ ಬಹುದಿತ್ತಲ್ಲವೆ?. ಶೃಂಗೇರಿ ಮಠಕ್ಕೆ ಮಾಡಿದ ಸಹಾಯವನ್ನಷ್ಟೇ ನೆನಪಿನಲ್ಲಿ ಇಟ್ಟುಕೊಳ್ಳ ಬಹುದಲ್ಲವೇ?. ಉತ್ತರ ಕರ್ನಾಟಕದಲ್ಲಿ, ಕೊಡಗಿನಲ್ಲಿ ಸಾವಿರಾರು ಹಿಂದುಗಳನ್ನು ಕೊಂದು, ಲಕ್ಷಾಂತರ ಮಂದಿಯನ್ನು ಬಲವಂತವಾಗಿ ಮತಾಂತರ ಗೊಳಿಸಿ, ನೂರಾರು ದೇವಾಲಯಗಳನ್ನು ನೆಲಕ್ಕುರುಳಿಸಿದ   ‘ಟೈಗರ್’ನ ಕಾರ್ಯಗಳನ್ನು ನಮ್ಮ ಜಾತ್ಯಾತೀತ ಮೇಧಾವಿಗಳಂತೆಯೇ ಅವರೂ ಮರೆತು ಹೋಗಬಹುದಲ್ಲವೇ?.
     ಅದರಲ್ಲಿಯೂ ‘ಮಹಾ ಜಯಂತಿ’ಗೆ ಸಿದ್ದರಾಮಯ್ಯ ಆಯ್ದುಕೊಂಡ ದಿನಾಂಕವಾದರೂ ಯಾವುದು? ಟಿಪ್ಪು ಸುಲ್ತಾನ ಹುಟ್ಟಿದ ನವಂಬರ್ 20ರಂದೇ? ಅಲ್ಲವೇ ಅಲ್ಲ. ಮೇಲುಕೋಟೆಯಲ್ಲಿ ಒಂದೇ ದಿನ 700 ಮಂದಿ ಅಯ್ಯಂಗಾರ್‍ಗಳನ್ನು ಟಿಪ್ಪು ಸಾಹೇಬರು ನೇಣಿಗೇರಿಸಿದ ನವಂಬರ್ 10 ಅನ್ನು!. ಆ ಭಯಾನಕ ದುರ್ದಿನವನ್ನು ಮರೆತು ಹೋಗಲಾರದೆ ಮೇಲುಕೋಟೆಯ ಅಯ್ಯಂಗಾರ್‍ಗಳು ಇಂದಿಗೂ ದೀಪಾವಳಿ ಹಬ್ಬವನ್ನೇ ಮಾಡಿಕೊಳ್ಳುವುದಿಲ್ಲವಂತೆ. ಅದು ಅವರ ಕರ್ಮ. ಇತರೆ ಊರುಗಳಲ್ಲಿನ ಹಿಂದುಗಳಿಗೆ ಏನಾಗಿದೆ? ಸಿದ್ದರಾಮಯ್ಯನ ಜಾತ್ಯಾತೀತ ಸರ್ಕಾರ ಮಿಕ್ಕೆಲ್ಲಾ ಕೆಲಸಗಳನ್ನು ಬದಿಗಿಟ್ಟು ಓರ್ವ ಜಾತ್ಯಾತೀತವಾದಿ ಮಹಾವೀರನನ್ನು-ಆತ ಸತ್ತ ಎರಡು ಶತಮಾನಗಳಿಗೆ ಗೋರಿಯಿಂದ ಎಬ್ಬಿಸಿ ‘ಜನ್ಮದಿನ’ವನ್ನು ಅದ್ಧೂರಿಯಾಗಿ ನಡೆಸುತ್ತಾ...ಹುಣ್ಣಿನ ಮೇಲೆ ಬರೆ ಎಳೆಯುವಂತೆ ಟಿಪ್ಪುವಿನಿಂದ ನೋವಿಗೆ ಒಳಗಾದ ಕೊಡಗು ಜಿಲ್ಲೆಯಲ್ಲಿ ಕೇರಳದಿಂದ ಕರೆತಂದ ಬಾಡಿಗೆ ಜನಗಳಿಂದÀ ದೊಡ್ಡದಾದ ಮೆರವಣಿಗೆಯನ್ನು ಹೊರಡಿಸಿದರೆ ಹಿಂದುಗಳು ಬಾಯಿ ಮುಚ್ಚಿಕೊಂಡು ತೆಪ್ಪಗೆ ಬಿದ್ದಿರ ಬಹುದಿತ್ತಲ್ಲವೇ?.
     ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಹಕ್ಕನ್ನು ಸಂವಿಧಾನ ದೇಶದ ಎಲ್ಲ ನಾಗರೀಕರಿಗೂ ಕೊಟ್ಟಿರ ಬಹುದು. ಹಾಗೆಂದ ಮಾತ್ರಕ್ಕೇ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮೊದಲಾದ ಹಿಂದೂ ಮತೋನ್ಮಾದ ಫಾಸಿಸ್ಟ್ ಸಂಸ್ಥೆಗಳು ಅಂತಹ ಮೂಲಭೂತ ಹಕ್ಕನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡರೆ ಹೇಗೆ ಸಹಿಸಿಕೊಂಡಿರುತ್ತೇವೆ? ಹಿಂದುತ್ವವಾದಿಗಳು ಶಾಂತಿಯುತವಾಗಿಯೇ ಗುಂಪುಸೇರಿ ಘೋಷಣೆಗಳನ್ನು ಕೂಗುತ್ತಾ ಇರಬಹುದು. ಅವರ ಕೈಗಳಲ್ಲಿ ಯಾವುದೇ ಆಯುಧಗಳೂ ಇಲ್ಲದೆ ಇರಬಹುದು. ಕೇರಳದಿಂದ ವಿಶೇಷ ವಾಹನಗಳಲ್ಲಿ ವಿಶೇಷ ಕಾರ್ಯಕ್ಕಾಗಿ ಕರೆಸಿಕೊಂಡಿದ್ದ ಬಾಂಗ್ಲಾದೇಶಿ ಮುಸಲ್ಮಾನರು, ಇತರೆ ದುಷ್ಕರ್ಮಿಗಳೇ ಅವರ ಮೇಲೆ ವಿನಾಕಾರಣವಾಗಿ ಮುಗಿಬಿದ್ದು ಕಾಲುಕೆರೆದು ಜಗಳಕ್ಕೆ ಕಾಲು ಕೆರೆದಿರಬಹುದು. ಆ ದಾಳಿಗಳಲ್ಲಿ 70ವರ್ಷ ಆಸುಪಾಸಿನ ವಯಸ್ಸಿನ ಒಬ್ಬ ಗೌರವಾನ್ವಿತ ವಿಹೆಚ್‍ಪಿ ಮುಖಂಡನ ಪ್ರಾಣ ಹೋಗಿರಬಹುದು.
      ಆದರೂ – ದಾಳಿ ನಡೆದಿದ್ದು ಹಿಂದುಗಳ ಮೇಲೆ ಆದಾಗ ಅದನ್ನು ‘ಎರಡು ಗುಂಪುಗಳ ನಡುವಿನ ಘರ್ಷಣೆ’ ಎಂದಾಗಿ ನೋಡಬೇಕು ಎಂದು ಜಾತ್ಯಾತೀತ ತತ್ವ ಹೇಳುವುದಿಲ್ಲವೇ? ಹಿಂದೂ ಸಂಸ್ಥೆಗಳವರು ಪ್ರತಿಭಟನೆಗೆ ಇಳಿದಿದ್ದರಿಂದಲೇ ನಡು ರಸ್ತೆಯಮೇಲೆ ಒಬ್ಬ ಹಿರಿಯ ವ್ಯಕ್ತಿಯ ಕೊಲೆ ನಡೆದಿದೆ ಆದ್ದರಿಂದ ತಪ್ಪೆಲ್ಲವೂ ಆ ಸಂಸ್ಥೆಗಳದ್ದೇ. ಕೆಣಕಿರುವ ಬಿಸಿರಕ್ತದ ಯುವಕರ ಕಣ್ಣಿಗೆ ಬಿದ್ದಿದ್ದರಿಂದಲೇ ಅಲ್ಲವೇ ದುರಾದೃಷ್ಟದಿಂದ ಆತನ ಪ್ರಾಣ ಹೋಗಿದ್ದು.
       ಒಂದುವೇಳೆ ಅಲ್ಪಸಂಖ್ಯಾತರ ಮೇಲೆ ಇಂತಹ ದಾಳಿ ನಡೆದಿದ್ದರೆ ಇಷ್ಟು ಹೊತ್ತಿಗೆ ಜಾತ್ಯಾತೀತ ಮೇಧಾವಿಗಳು ಬೊಬ್ಬೆ ಹೊಡೆಯುತ್ತಿದ್ದರು. ಸಾಹಿತಿಗಳು ಸವೆದು ಹೋದ ಕೆಲಸಕ್ಕೆ ಬಾರದ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದರು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಹಿಂದು ಫಾಸಿಜಂ ಅನ್ನು ಖಂಡಿಸುತ್ತಾ ಸಂಪಾದಕೀಯ ಬರೆದಿರುತ್ತಿದ್ದರು. ದಾಳಿ ನಡೆದಿದ್ದು ಹಿಂದುಗಳ ಮೇಲೆ ಆದ್ದರಿಂದ, ಮೃತಪಟ್ಟವನು ಹಿಂದೂ ಸಂಸ್ಥೆಯ ಮುಖಂಡನಾದ್ದರಿಂದ ಅದರ ಕುರಿತು ಮಾತನಾಡುವುದು ಮರ್ಯಾದಸ್ಥರಿಗೆ ನಿಷಿದ್ಧ. ಟಿಪ್ಪುವನ್ನು ಒಪ್ಪದ ಹಿಂದುಗಳ ಅಸಹಿಷ್ಣುತೆಯನ್ನೇ ಪವಿತ್ರರಾದ ಜಾತ್ಯಾತೀತವಾದಿಗಳು ಖಂಡನೆ ಮಾಡಬೇಕು. ಹಿಂದುಗಳು ಪ್ರತಿಭಟನೆ ಮಾಡಲೂ ಆಸ್ಪದ ನೀಡದ ಅನ್ಯರ ಅಸಹನೆಯನ್ನು ಹಿಡಿಸಿಕೊಂಡರೆ ಅವರ ಜಾತ್ಯಾತೀತವಾದಕ್ಕೆ ಭಂಗ ಉಂಟಾಗುತ್ತದೆ. ಗಿರೀಶ್ ಕಾರ್ನಾಡ್ ಎಂಬ ಜಾತ್ಯಾತೀತ ದೇಶಭಕ್ತನನ್ನು ಯಾರೋ ಹೊಟ್ಟೆಯುರಿದವನು ಟ್ವಿಟ್ಟರ್‍ನಲ್ಲಿ ಬೆದರಿಸಿದ್ದಾನೆಂಬ ಸುದ್ದಿಯೇ ಈ ಒಟ್ಟು ಘಟನೆಯಲ್ಲಿ ಪತ್ರಿಕೆಗಳಿಗೆ ತಲೆಬರಹ.
ಇಂಡಿಯನ್ ಬ್ರಾಂಡ್ ಸೆಕ್ಯುಲರಿಜಂ ಜಿಂದಾಬಾದ್!

No comments:

Post a Comment